ಆಧುನೀಕರಣದ ಪಾಠ ಕೇಳ್ತಾವ ಪಾರಿವಾಳದ ಕೈಲಿ ಪ್ರೇಮಪತ್ರ ಕಳ್ಸಿ ಅಂತ ಹೇಳಾಕಾಯ್ತದಾ?
“ಯಾಕ್ಲಾ ಸಿಂಗ್ರಿ ಮಂಕಾಗಿದೀಯಾ?”
“ ಥೂ ಇವನೌನ....ಗ್ರಾಚಾರ ಸರಿ ಇಲ್ಲ ಬುಡು ರಾಘಣ್ಣ”
“ಯಾಕ್ಲಾ ಏನಾತು? ಅಚ್ಚೇ ದಿನ್ ಬಂದಿರೋದು ಕಾಣಾಕಿಲ್ವೇನ್ಲಾ?”
“ ಅದೇನ್ಬಂತೋ ಕಾಣೆ ಕಣಪ್ಪಾ...ಬೀಡಿ ಸುಡ್ತೈತೆ...ನನ್ಹೆಂಡ್ರು ಮೂವತ್ವರ್ಷದಿಂದ ಬುಡ್ಸಕಾಗ್ದೇರೋ ಬೀಡೀನಾ ಜೇಟ್ಲಿ ಜಟ್ ಅಂತ ಬುಡುಸ್ಬುಟ್ಟ”
“ ಒಳ್ಳೇದಾತು ಬುಡ್ಲಾ....ನಿನ್ ಎದೆಗೂಡು ಹೊಗೆಗೂಡಾಗೋಗಿತ್ತು....”
“ ಅದ್ಕಲ್ಲ ಕಣಣ್ಣ ಬೇಜಾರು......ಮಗ ಈ ವರ್ಸ ಕಾಲೇಜ್ ಸೇರದೆ....”
“ ಇದೂ ಒಳ್ಳೆ ಸುದ್ದಿ ಅಲ್ವೇನ್ಲಾ? ಫೇಲಾಗೋಯ್ತು ಅಂತ ಗೋಳಾಡೋ ಕಾಲ್ದಲ್ಲಿ ಪಾಸ್ ಆಗಿ ಕಾಲೇಜ್ ಸೇರದೆ ಅಂದ್ರೆ ಸಂತೋಸ ಕಣ್ಲಾ”
“ ಪೂರಾ ಯೋಳೋದ್ ಕೇಳಪ್ಪಾ.....ಒಸಾ ಮೊಬೈಲ್ ಕೊಡ್ಸು ಅಂತು, ಕೊಡ್ಸ್ದೆ. ಈಗ ನೋಡ್ದ್ರೆ.....ಮೊಬೈಲ್ ಮಡಿಕಂಡ್ರೆ ರೇಪಾಗೋಯ್ತದೆ ಅಂತಾವ್ರೆ...”
“ ಯಾವ್ ಬೇಕೂಪ್ ನನ್ಮಗನ್ಲಾ ಅಂಗಂದೋನು?”
“ ಮೆಲ್ಲಗ್ ಮಾತಾಡು ರಾಘಣ್ಣ, ಒಳಿಕಾಕಿ ಏರೋಪ್ಲೇನ್ ಎತ್ತಿಸ್ಬುಡ್ತಾರೆ...ಅಕ್ಕುಚುತಿಯಾಯ್ತು ಅಂತ...”
“ಮೆಲ್ಗೆ ಕೇಳ್ತೀನಿ, ಯಾರು ಅಂಗಂದೋರು? ಅವ್ರ್ದೇನು ಚುತಿಯಾಯ್ತದಂತೆ..ತಿಥಿ ಮಾಡ್ಬೇಕು ಇಂತ ನನ್ಮಕ್ಳಿಗೆ...”
“ ರಾಘಣ್ಣ... ಸಾಸಕ್ರು ಕಣಪ್ಪ ಅಂಗಂದೋರು...ಸಾಸಕ್ರು.....”
“.........”
“ ಮಕ್ಕಳ ತಾವ ಮೊಬೈಲ್ ಇದ್ರೆ ಮನ್ಸು ಕೆಟ್ಟೋಯ್ತದಂತೆ, ಕೆಟ್ಟದಾರಿ ಇಡೀತಾರಂತೆ....ಅಂಗೆ ರೇಪೂ ಆಗೋಯ್ತದಂತೆ....ನನ್ಹೆಂಡ್ರು ಮಗಿನ್ ಮೊಬೈಲ್ ಕಿತ್ತು ಮಡಿಕ್ಕಂಡವ್ಳೆ, ಮಗ ಮಧ್ಯಾನ್ದಿಂದ ಊಟ ಬುಟ್ಟು ಮನಗ್ಬುಟ್ಟದೆ”
“ ಯಾರ್ಲಾ ಅಂಗಂದೋನು...ಕಾಶಪ್ಪನೋ, ಕ್ಯಾಶಪ್ಪನೋ? ಅಥವಾ......”
“ಯಾರು ರಾಘಣ್ಣ ಕಾಶಪ್ಪ?”
“ಅದ್ಕೆ ನೋಡೂ ...ನೀನು ಬುದ್ವಂತ ಆದ್ರೂ ಐಎಎಸ್ ಪಾಸಾಗ್ಲಿಲ್ಲ....ಜಿ.ಕೆ. ನೇ ಇಲ್ವಲ್ಲೋ ಸಿಂಗ್ರಿ ನಿಂಗೆ....ಲೇ ಕಾಶಪ್ಪ ಅಂದ್ರೆ ಮೊನ್ನೆ ಮಲ್ಲಯ್ಯನ್ ಬಾರಲ್ಲಿ ಜೀನ್ಸ್ ಇಕ್ಕೊಂಡು ಕೈಯಲ್ಲಿ ಸಿಗರೇಟು ಸುಡ್ತಾವ ಗ್ಲಾಸ್ ಅಲ್ಲಿ ಬಣ್ಣದ್ ನೀರು ಬುಟ್ಕೊಂಡು ಕಣ್ಣು ಕೆಂಪೇರಿಸ್ತಾ ಕುಂತಿದ್ದ ಅಂತ ಪೇಪರ್ನಾಗೆ ಬರ್ಲಿಲ್ವೇನ್ಲಾ? ಅದೇ ಉನ್ಗುಂದ ಸಾಸ್ಕ ಇಜ್ಯಾನಂದ ಕಾಶಪ್ಪ...”
“ ಓ...ಈಗ್ಗೊತ್ತಾಯ್ತು..ಬುಡಣ್ಣ ಇನ್ಮ್ಯಾಲೆ ಗುಂಡು ಸಿಗರೇಟು ಎಲ್ಲ ಅಂತೋರ್ಗೆಯಾ....ಮತ್ತೆ ಈ ಕ್ಯಾಶಪ್ಪ ಯಾರಣ್ಣ?”
“ ಹಲ್ಕಾ ನನ್ಮಗ್ನೆ.....ಅದ್ಯಾರೂಂತ ಗೊತ್ತಿಲ್ದೆ ಕರ್ನಾಟ್ಕದಲ್ಲಿದ್ದೀಯ...ಮುಂದ್ಲ ಕಾವೇರಿ ಗಲಾಟೇನಾಗೆ ನಿನ್ನ ಕಾವೇರಿ ಜೊತೆ ತಮಿಳ್ನಾಡಿಗೆ ಹರಿಸ್ಬುಡ್ಬೇಕು....ಲೇ ಅವ್ರೇ ಕಣೋ ನಮ್ ಮಣ್ಣಿನ ಮೊಮ್ಮಗ!”
“ ಅಣ್ಣಾ.....”
“ಲೇ ಎದೆಗೊದಿತೀನಿ...ಕಣ್ ಕಣ್ ಬುಡ್ಬೇಡಾ...ದೇವೇಗೌಡ್ರು ಮಣ್ಣಿನ ಮಗ ಆದ್ಮೇಲೆ ಅವರ ಮಗ ಮಣ್ಣಿನ ಮೊಮ್ಮಗ ಅಲ್ವೇನ್ಲಾ?”
“ ಓ ಇಂಗೆ ಸಮಾಸಾರ...”
“ ಊಂ ಮತ್ತೆ ಈಗ ಅವ್ರೆ ಕಣ್ಲಾ ಕ್ಯಾಶಪ್ಪ.....ಒಪ್ಕಂಬುಟ್ರು ಕಾಸಿಲ್ದೆ ರಾಜಕೀಯ ಇಲ್ಲ ಅಂತ. ‘ನಲವತ್ತು ಕೋಟಿ ಮಡಗು ಎಂಎಲ್ಸಿ ಆಗು’ ಅಂದ್ರು ಅಂತ ಸುದ್ದಿ ಬರ್ಲಿಲ್ವೇನ್ಲಾ?”
“ನಲವತ್ತು ಕೋಟಿ ಅಂದ್ರೆ ನಾಕರ ಪಕ್ಕ ಎಸ್ಟು ಸೊನ್ನೆಯಣ್ಣಾ?”
“ಬೇವಾರಿಸ್ ನನ್ಮಗ್ನೆ.....ಅದು ಗೊತ್ತಿದ್ರೆ ನಾನು ನೀನು ಯಾಕ್ಲಾ ಇಂಗೆ ಫುಟ್ಪಾತಲ್ಲಿ ಹಲ್ಟೆ ಒಡಿತಿದ್ವಿ....ಈ ಸೊನ್ನೆಗಳೇ ನಮ್ಮ ಸ್ವಸಂತ್ರ ಭಾರತದ ಸಾಧನೆ ಕಣೋ.”
“ ಅಲ್ಲಣ್ಣ ಕನ್ನಡದಲ್ಲಿ ಬೇವಾರ್ಸಿ ಅಂತ ಬೈದೆನೆಯಾ...ಇದೇನಣ್ಣ ಇಂಗೆ ಬಿಡ್ಸಿ ಬಿಡ್ಸಿ ಬೇವಾರಿಸ್ ಅಂತ ಬೈತೀಯಾ?”
“ ಲೇ ಮೋದಿ ಗೊತ್ತೇನ್ಲಾ?”
“ ಅದೇ ಗಡ್ಡ ಬುಟ್ಕೊಂಡು, ಹೆಂಡ್ರ ಬುಟ್ಬುಟ್ಟಿ...೫೬ ಇಂಚೆ ಎದೆಯ ಉಬ್ಬಿಸ್ಕೊಂಡು..ಪ್ರಧಾನಿ ಆಗವ್ರಲ್ಲ....’
“ಥೂ...ಅಂಗೇನ್ಲಾ ದೊಡ್ಡೋರ್ನ ಗುರ್ತ್ಸೋದು?...ಓಗ್ಲಿ...ಈಗ ಇಂದೀನ ಜಾಸ್ತಿ ಬಳಸ್ಬೇಕೂಂತ ಒಂತರಾ ಒತ್ತಡ ಐತೆ ಗೊತ್ತೇನ್ಲಾ? ಅದ್ಕೆ...ಹಿಂದಿ ಪದ ಲಾವಾರಿಸ್ ಮತ್ತೆ ಕನ್ನಡ ಪದ ಬೇವಾರ್ಸಿ ಸೇರ್ಸಿ ಬೇವಾರಿಸ್ ಅಂತ ಬೈದೆ....”
“ ಏ ನಿಂದೊಳ್ಳೆ ತಮಾಸೆ, ಅಥ್ವಾ ಮೋದಿ ಮೆಚ್ಸಿ ಏನಾರ ಸೀಟು..ಪಾಟು....ಅದಿರ್ಲಿ ಕಾಸಪ್ಪ, ಕ್ಯಾಸಪ್ಪ ಇಬ್ರೂ ಅವ್ರವ್ರ್ ಲೋಕ್ದಾಗವ್ರೆ.....ಅವ್ರಲ್ಲ ಬುಡಣ್ಣ...ಅದೇನೋ ಸಾಸಕರ ಸಮಿತಿ ಅಂತೆ ..ಕಣಣ್ಣ....ಮೊಬೈಲ್ ಕೊಡ್ಬೇಡಿ ಮಕ್ಕಳ ಕೈಗೆ, ಸ್ಕೂಲು, ಕಾಲೇಜ್ನಾಗೆ ಬಳಸಂಗಿಲ್ಲ ಅನ್ಬುಟ್ಟವ್ರೆ.”
“ ಸರ್ಯಾಗ್ ಹೇಳವ್ರೆ ಬುಡು ಕ್ಲಾಸಲ್ಲಿ ಕುಂತು ಮಸೇಜು, ಪಿಸೇಜು, ಪೇಸ್ಬುಕ್ಕು ಅಂತ ನೋಡ್ದ್ರೆ ಪಾಠ ಎಂಗ್ಲಾ ತಲೆಗೋಗ್ಬೇಕು?..ಮೊಬೈಲಿರೋದು ಸಾಸಕರಿಗೆ ಮಾತ್ರ...ಸದನದಲ್ಲಿ ಬಿಸಿಬಿಸಿ ಚರ್ಚೆ ನಡೀತಿರ್ಬೇಕಾದ್ರೆ ಇವ್ರು ಹಸಿಹಸಿ ದೃಸ್ಯಾನ ಅಂಗೆ ನೋಡ್ತಾವ ಪುಲಕಿತರಾಗ್ಬೇಕು ಕಣ್ಲಾ... ....”
“ ಬುಡು ಬುಡು ರಾಘಣ್ಣ ನೀನು ಇಸ್ಯಾನ ಎಲ್ಲಿಂದೆಲ್ಲಿಗೋ ಎಳ್ಕತೀಯಾ.....ಈಗ ಏನಪಾ ಮಾಡೋದು...?”
“ ಲೇ, ದೇಸ ಮುಂದೆ ಓಡ್ಬೇಕೂ ಅಂತಾ ಕೇಂದ್ರದಲ್ಲಿ ಆನಂದ ಗೌಡ್ರು ಬುಲೆಟ್ ಟ್ರೇನು ಬುಡ್ತಾವ್ರೆ..ಇಲ್ಲಿ ನೀವು ಆಧುನೀಕರಣದ ಪಾಠ ಕೇಳ್ತಾವ ಪಾರಿವಾಳದ ಕೈಲಿ ಪ್ರೇಮಪತ್ರ ಕಳ್ಸಿ ಅಂತ ಹೇಳಾಕಾಯ್ತದೇನ್ಲಾ? ನೀನು ಆ ಮೂಲೆ ಮನೆ ನಿಂಗಿಗೆ ನನ್ ತಾವಾನೇ ಕಾಗ್ದ ಬರ್ಸಿ ಬರ್ಸಿ ನನ್ಕೈಯಾಗೆ ಕಳ್ಸಿ ಕಳ್ಸಿ ಆಮೇಲೆ ಲಗ್ನಪತ್ರಿಕೆ ದಿನ ಅವಳ್ಗೆ ನಿನ್ ಬಂಡ್ವಾಳ ಗೊತ್ತಾಗಿ ರಂಪಾಟ ಆಗ್ಲಿಲ್ವೇನ್ಲಾ?”
“ ಬುಡ್ತು ಅನ್ನು ರಾಘಣ್ಣ, ಈಗ ದಿವ್ನಾಗ್ ಸಂಸಾರ ನಡ್ಸಿಲ್ವಾ? ಮಗಿನ್ ಪೋನ್ ಕಿತ್ ಮಡಿಕ್ಕಂಡವ್ಳೆ. ಕೊಡಾಕಿಲ್ಲ, ಮಗ ಹಾಳಾಗ್ ಹೋಯ್ತದೆ ಅಂತಾವ್ಳೆ. ಹೆಂಡ್ರು ಅಂತ ಸುಮ್ಗೆ ಬಿಟ್ಟ್ಟೀವ್ನಿ...”
“ ನೀನ್ ಬಲ್ ಸೂರ ಬುಡು. ಅಲ್ಲಾ ಈ ಫೋನ್ ಇಂದ ಎಂತಂತ ಘನಂದಾರಿ ಕೆಲ್ಸ ಆಯ್ತದೆ ಓಯ್ತದೆ..ವಸಿನಾರ ಬುದ್ಧಿ ಬ್ಯಾಡ್ವೇನ್ಲಾ ಇವ್ರಿಗೆ? ಕದ್ದಾಲಿಕೆ ಮಾಡಿ ಸಿಗಬಿದ್ದು ಮಸಿ ಬಳ್ಕಂಡವರವ್ರೆ, ಫೋನ್ ಅಲ್ಲಿ ಮಾತಾಡಿ ಮಾತಾಡಿ ಬರಡು ಹೃದಯವ ಹಸಿಯಾಗಿಸ್ಕೊಂಡೂ ಗದ್ದುಗೆ ಬುಟ್ಟು ಸಂಸಾರದ್ ಸೆರಗಿಡಿದವರವ್ರೆ. ಮೊದ್ಲಿನಂಗೆ ಫೋನ್ ಬೂತ್ಗಳೆಲ್ಲೈತಪ್ಪಾ ಈಗ? ದೂರ ಪಾರ ಓಗೋ ಮಕ್ಳು ಮನೆಗೆ ಇಸ್ಯ ತಿಳಿಸ್ಬೇಕು ಅಂದ್ರೆ ಏನಪ್ಪಾ ಮಾಡೋದು?”
“ ಪರಿಹಾರ ಏಳಪ್ಪಾ ಅಂದ್ರೆ ಬುಲ್ಡೆ ಬುಡ್ತಿಯಲ್ಲ ರಾಘಣ್ಣ.....”
“ ಏನು ನನ್ಮಗ ಇವ್ನು, ಕಾಸ್ ಕೊಟ್ ಮಡಿಕಂಡವ್ನೆ, ಪರಿಹಾರ ಏಳ್ಬುಡ್ಬೇಕು. ಬುದ್ಧಿ ಇದ್ರೆ ಪರಿಯಾರನೂ ಇರ್ತದೆ ಕಣ್ಲಾ...ಅಣೇಲಿ ನೀರಿದ್ರೂ ತೂಬುನ್ ಬಾಯ್ ತೆಗೆದ್ರೆ ಅಲ್ವೇನ್ಲಾ ನೀರು ಅರಿಯೋದು?”
“ ಅಂದ್ರೆ?”
“ ಲೇ, ಅದೆಂತದೊ ಜಾಮರ್ ಅಂತೆ ಕಣ್ಲಾ. ಸಾವ್ರಾರು ಹುಡ್ರುಗೆ ಮೊಬೈಲ್ ತರ್ಬೇಡಿ ಅನ್ನೋ ಬದ್ಲು ಅದ್ನ ಬಿಲ್ಡಿಂಗ್ ಗೆ ಸಿಗಿಸ್ಬುಟ್ರೆ ಅಲ್ಲಿ ಮೊಬೈಲ್ ಸಿಗ್ನಲ್ ಬರಾಕಿಲ್ಲ ಕಣ್ಲಾ. ಊರ್ಗೆಲ್ಲ ಚಪ್ರ ಆಕ್ಸೋ ಬದ್ಲು ತಲೆಗೆ ವಲ್ಲಿ ಸುತ್ಕೊಂಡು ನೆಳ್ಳು ಕಂಡಂಡ್ಕಂಗೆ ಕಣ್ಲಾ ಇದು. ಬಿಲ್ಡಿಂಗ್ ಒಳ್ಗೆ ಸಿಗ್ನಲ್ ಸಿಗಾಕಿಲ್ಲ. ಸ್ಕೂಲು ಕಾಲೇಜು ಇಂದ ಆಚೆ ಬಂದ್ಮೇಲೆ ಎಷ್ಟಾರ ಮಾತಾಡ್ಲಿ ಬುಡ್ಲಾ.....”
“ ಮತ್ತ ಅದ ಯಾಕೆ ಮಾಡಾ ಒಲ್ರು?”
“ಅಂಗೆ ಮಾಡ್ಬುಟ್ರೆ ಮೇಸ್ಟ್ರುಗಳ ಮೊಬೈಲೂ ಸತ್ತೋಯ್ತದೆ! ಅವ್ರ್ ಎಂಡ್ರು ಮಕ್ಳು ಕುಟ್ಟೆ ಮಾತಾಡ್ಬೇಕಲ್ಲಾ.....ಅದ್ಕೆ ಬಿಲ್ಡಿಂಗೆ ಜಾಮರ ಹಾಕೋ ಬದಲು ಸಾವ್ರಾರು ವಿದ್ಯಾರ್ಥಿಗಳು ಮೊಬೈಲ್ ತರಂಗಿಲ್ಲ ಅಂತ ಕಾನೂನು ಮಾಡ್ತಾವ್ರೆ.”
“ ಸರಿಯಿಲ್ಲ ಬುಡಣ್ಣ ಇದು. ಈಗ ಮಗೀಗ್ ಎಂಗಪ್ಪಾ ಸಮಾಧಾನ ಮಾಡೋದು?”
“ ಏ, ಇದೇನು ಆಗಲ್ಲ, ಓಗಲ್ಲ ನಡಿಲಾ ಸಿಂಗ್ರಿ”
“ ಇದೇನಣ್ಣ ಇಂಗಂದ್ಬುಟ್ಟೆ!”
“ ಮತ್ತೆ ಈ ಪಾಟಿ ಮೊಬೈಲು ಕಂಪೆನಿಗಳು ಐಲು ಜನನಾಯಕ್ರು ಇರೋವಾಗ ಆಯ್ತದೇನ್ಲಾ ಇದು?...ಸುಮ್ನೆ ಹೊಟ್ಟೆ ಕೆಟ್ಟಾಗ ಒಂದು ಹೂಸು ಬಿಟ್ಟಂಗೆ ಇಂಗೆ ಒಂದು ಮಾತು ಎಸೀತಾರೆ. ಮೂರು ನಿಮ್ಸ ಮೂಗು ಮುಚ್ಕೊ....ಮೂರ್ ದಿನ ಆದ್ಮೇಲೆ ಕಾನೂನ ಕಿತ್ತಾಕ್ತಾರೆ....ನಡಿ ಮಗೀಗೂ ಆ ನಿಂಗವ್ವಗೂ ಸಮಾಧಾನಾ ಏಳ್ತೀನಿ.”
“ ಬಾರಣ್ಣೋ ಪುಣ್ಯ ಬತ್ತದೆ. ಇವತ್ತು ಸನಿವಾರ ಅಲ್ಲ್ವಾ ಕಾಳುಪ್ಪಿಟ್ ಮಾಡವ್ಳೆ, ಜೊತೆಗೆ ಬಿಸಿ ಕಾಫೀನೂ ಉಯ್ಕಳಾವ..ಬಾ...”
“ ಥೂ ಇವನೌನ....ಗ್ರಾಚಾರ ಸರಿ ಇಲ್ಲ ಬುಡು ರಾಘಣ್ಣ”
“ಯಾಕ್ಲಾ ಏನಾತು? ಅಚ್ಚೇ ದಿನ್ ಬಂದಿರೋದು ಕಾಣಾಕಿಲ್ವೇನ್ಲಾ?”
“ ಅದೇನ್ಬಂತೋ ಕಾಣೆ ಕಣಪ್ಪಾ...ಬೀಡಿ ಸುಡ್ತೈತೆ...ನನ್ಹೆಂಡ್ರು ಮೂವತ್ವರ್ಷದಿಂದ ಬುಡ್ಸಕಾಗ್ದೇರೋ ಬೀಡೀನಾ ಜೇಟ್ಲಿ ಜಟ್ ಅಂತ ಬುಡುಸ್ಬುಟ್ಟ”
“ ಒಳ್ಳೇದಾತು ಬುಡ್ಲಾ....ನಿನ್ ಎದೆಗೂಡು ಹೊಗೆಗೂಡಾಗೋಗಿತ್ತು....”
“ ಅದ್ಕಲ್ಲ ಕಣಣ್ಣ ಬೇಜಾರು......ಮಗ ಈ ವರ್ಸ ಕಾಲೇಜ್ ಸೇರದೆ....”
“ ಇದೂ ಒಳ್ಳೆ ಸುದ್ದಿ ಅಲ್ವೇನ್ಲಾ? ಫೇಲಾಗೋಯ್ತು ಅಂತ ಗೋಳಾಡೋ ಕಾಲ್ದಲ್ಲಿ ಪಾಸ್ ಆಗಿ ಕಾಲೇಜ್ ಸೇರದೆ ಅಂದ್ರೆ ಸಂತೋಸ ಕಣ್ಲಾ”
“ ಪೂರಾ ಯೋಳೋದ್ ಕೇಳಪ್ಪಾ.....ಒಸಾ ಮೊಬೈಲ್ ಕೊಡ್ಸು ಅಂತು, ಕೊಡ್ಸ್ದೆ. ಈಗ ನೋಡ್ದ್ರೆ.....ಮೊಬೈಲ್ ಮಡಿಕಂಡ್ರೆ ರೇಪಾಗೋಯ್ತದೆ ಅಂತಾವ್ರೆ...”
“ ಯಾವ್ ಬೇಕೂಪ್ ನನ್ಮಗನ್ಲಾ ಅಂಗಂದೋನು?”
“ ಮೆಲ್ಲಗ್ ಮಾತಾಡು ರಾಘಣ್ಣ, ಒಳಿಕಾಕಿ ಏರೋಪ್ಲೇನ್ ಎತ್ತಿಸ್ಬುಡ್ತಾರೆ...ಅಕ್ಕುಚುತಿಯಾಯ್ತು ಅಂತ...”
“ಮೆಲ್ಗೆ ಕೇಳ್ತೀನಿ, ಯಾರು ಅಂಗಂದೋರು? ಅವ್ರ್ದೇನು ಚುತಿಯಾಯ್ತದಂತೆ..ತಿಥಿ ಮಾಡ್ಬೇಕು ಇಂತ ನನ್ಮಕ್ಳಿಗೆ...”
“ ರಾಘಣ್ಣ... ಸಾಸಕ್ರು ಕಣಪ್ಪ ಅಂಗಂದೋರು...ಸಾಸಕ್ರು.....”
“.........”
“ ಮಕ್ಕಳ ತಾವ ಮೊಬೈಲ್ ಇದ್ರೆ ಮನ್ಸು ಕೆಟ್ಟೋಯ್ತದಂತೆ, ಕೆಟ್ಟದಾರಿ ಇಡೀತಾರಂತೆ....ಅಂಗೆ ರೇಪೂ ಆಗೋಯ್ತದಂತೆ....ನನ್ಹೆಂಡ್ರು ಮಗಿನ್ ಮೊಬೈಲ್ ಕಿತ್ತು ಮಡಿಕ್ಕಂಡವ್ಳೆ, ಮಗ ಮಧ್ಯಾನ್ದಿಂದ ಊಟ ಬುಟ್ಟು ಮನಗ್ಬುಟ್ಟದೆ”
“ ಯಾರ್ಲಾ ಅಂಗಂದೋನು...ಕಾಶಪ್ಪನೋ, ಕ್ಯಾಶಪ್ಪನೋ? ಅಥವಾ......”
“ಯಾರು ರಾಘಣ್ಣ ಕಾಶಪ್ಪ?”
“ಅದ್ಕೆ ನೋಡೂ ...ನೀನು ಬುದ್ವಂತ ಆದ್ರೂ ಐಎಎಸ್ ಪಾಸಾಗ್ಲಿಲ್ಲ....ಜಿ.ಕೆ. ನೇ ಇಲ್ವಲ್ಲೋ ಸಿಂಗ್ರಿ ನಿಂಗೆ....ಲೇ ಕಾಶಪ್ಪ ಅಂದ್ರೆ ಮೊನ್ನೆ ಮಲ್ಲಯ್ಯನ್ ಬಾರಲ್ಲಿ ಜೀನ್ಸ್ ಇಕ್ಕೊಂಡು ಕೈಯಲ್ಲಿ ಸಿಗರೇಟು ಸುಡ್ತಾವ ಗ್ಲಾಸ್ ಅಲ್ಲಿ ಬಣ್ಣದ್ ನೀರು ಬುಟ್ಕೊಂಡು ಕಣ್ಣು ಕೆಂಪೇರಿಸ್ತಾ ಕುಂತಿದ್ದ ಅಂತ ಪೇಪರ್ನಾಗೆ ಬರ್ಲಿಲ್ವೇನ್ಲಾ? ಅದೇ ಉನ್ಗುಂದ ಸಾಸ್ಕ ಇಜ್ಯಾನಂದ ಕಾಶಪ್ಪ...”
“ ಓ...ಈಗ್ಗೊತ್ತಾಯ್ತು..ಬುಡಣ್ಣ ಇನ್ಮ್ಯಾಲೆ ಗುಂಡು ಸಿಗರೇಟು ಎಲ್ಲ ಅಂತೋರ್ಗೆಯಾ....ಮತ್ತೆ ಈ ಕ್ಯಾಶಪ್ಪ ಯಾರಣ್ಣ?”
“ ಹಲ್ಕಾ ನನ್ಮಗ್ನೆ.....ಅದ್ಯಾರೂಂತ ಗೊತ್ತಿಲ್ದೆ ಕರ್ನಾಟ್ಕದಲ್ಲಿದ್ದೀಯ...ಮುಂದ್ಲ ಕಾವೇರಿ ಗಲಾಟೇನಾಗೆ ನಿನ್ನ ಕಾವೇರಿ ಜೊತೆ ತಮಿಳ್ನಾಡಿಗೆ ಹರಿಸ್ಬುಡ್ಬೇಕು....ಲೇ ಅವ್ರೇ ಕಣೋ ನಮ್ ಮಣ್ಣಿನ ಮೊಮ್ಮಗ!”
“ ಅಣ್ಣಾ.....”
“ಲೇ ಎದೆಗೊದಿತೀನಿ...ಕಣ್ ಕಣ್ ಬುಡ್ಬೇಡಾ...ದೇವೇಗೌಡ್ರು ಮಣ್ಣಿನ ಮಗ ಆದ್ಮೇಲೆ ಅವರ ಮಗ ಮಣ್ಣಿನ ಮೊಮ್ಮಗ ಅಲ್ವೇನ್ಲಾ?”
“ ಓ ಇಂಗೆ ಸಮಾಸಾರ...”
“ ಊಂ ಮತ್ತೆ ಈಗ ಅವ್ರೆ ಕಣ್ಲಾ ಕ್ಯಾಶಪ್ಪ.....ಒಪ್ಕಂಬುಟ್ರು ಕಾಸಿಲ್ದೆ ರಾಜಕೀಯ ಇಲ್ಲ ಅಂತ. ‘ನಲವತ್ತು ಕೋಟಿ ಮಡಗು ಎಂಎಲ್ಸಿ ಆಗು’ ಅಂದ್ರು ಅಂತ ಸುದ್ದಿ ಬರ್ಲಿಲ್ವೇನ್ಲಾ?”
“ನಲವತ್ತು ಕೋಟಿ ಅಂದ್ರೆ ನಾಕರ ಪಕ್ಕ ಎಸ್ಟು ಸೊನ್ನೆಯಣ್ಣಾ?”
“ಬೇವಾರಿಸ್ ನನ್ಮಗ್ನೆ.....ಅದು ಗೊತ್ತಿದ್ರೆ ನಾನು ನೀನು ಯಾಕ್ಲಾ ಇಂಗೆ ಫುಟ್ಪಾತಲ್ಲಿ ಹಲ್ಟೆ ಒಡಿತಿದ್ವಿ....ಈ ಸೊನ್ನೆಗಳೇ ನಮ್ಮ ಸ್ವಸಂತ್ರ ಭಾರತದ ಸಾಧನೆ ಕಣೋ.”
“ ಅಲ್ಲಣ್ಣ ಕನ್ನಡದಲ್ಲಿ ಬೇವಾರ್ಸಿ ಅಂತ ಬೈದೆನೆಯಾ...ಇದೇನಣ್ಣ ಇಂಗೆ ಬಿಡ್ಸಿ ಬಿಡ್ಸಿ ಬೇವಾರಿಸ್ ಅಂತ ಬೈತೀಯಾ?”
“ ಲೇ ಮೋದಿ ಗೊತ್ತೇನ್ಲಾ?”
“ ಅದೇ ಗಡ್ಡ ಬುಟ್ಕೊಂಡು, ಹೆಂಡ್ರ ಬುಟ್ಬುಟ್ಟಿ...೫೬ ಇಂಚೆ ಎದೆಯ ಉಬ್ಬಿಸ್ಕೊಂಡು..ಪ್ರಧಾನಿ ಆಗವ್ರಲ್ಲ....’
“ಥೂ...ಅಂಗೇನ್ಲಾ ದೊಡ್ಡೋರ್ನ ಗುರ್ತ್ಸೋದು?...ಓಗ್ಲಿ...ಈಗ ಇಂದೀನ ಜಾಸ್ತಿ ಬಳಸ್ಬೇಕೂಂತ ಒಂತರಾ ಒತ್ತಡ ಐತೆ ಗೊತ್ತೇನ್ಲಾ? ಅದ್ಕೆ...ಹಿಂದಿ ಪದ ಲಾವಾರಿಸ್ ಮತ್ತೆ ಕನ್ನಡ ಪದ ಬೇವಾರ್ಸಿ ಸೇರ್ಸಿ ಬೇವಾರಿಸ್ ಅಂತ ಬೈದೆ....”
“ ಏ ನಿಂದೊಳ್ಳೆ ತಮಾಸೆ, ಅಥ್ವಾ ಮೋದಿ ಮೆಚ್ಸಿ ಏನಾರ ಸೀಟು..ಪಾಟು....ಅದಿರ್ಲಿ ಕಾಸಪ್ಪ, ಕ್ಯಾಸಪ್ಪ ಇಬ್ರೂ ಅವ್ರವ್ರ್ ಲೋಕ್ದಾಗವ್ರೆ.....ಅವ್ರಲ್ಲ ಬುಡಣ್ಣ...ಅದೇನೋ ಸಾಸಕರ ಸಮಿತಿ ಅಂತೆ ..ಕಣಣ್ಣ....ಮೊಬೈಲ್ ಕೊಡ್ಬೇಡಿ ಮಕ್ಕಳ ಕೈಗೆ, ಸ್ಕೂಲು, ಕಾಲೇಜ್ನಾಗೆ ಬಳಸಂಗಿಲ್ಲ ಅನ್ಬುಟ್ಟವ್ರೆ.”
“ ಸರ್ಯಾಗ್ ಹೇಳವ್ರೆ ಬುಡು ಕ್ಲಾಸಲ್ಲಿ ಕುಂತು ಮಸೇಜು, ಪಿಸೇಜು, ಪೇಸ್ಬುಕ್ಕು ಅಂತ ನೋಡ್ದ್ರೆ ಪಾಠ ಎಂಗ್ಲಾ ತಲೆಗೋಗ್ಬೇಕು?..ಮೊಬೈಲಿರೋದು ಸಾಸಕರಿಗೆ ಮಾತ್ರ...ಸದನದಲ್ಲಿ ಬಿಸಿಬಿಸಿ ಚರ್ಚೆ ನಡೀತಿರ್ಬೇಕಾದ್ರೆ ಇವ್ರು ಹಸಿಹಸಿ ದೃಸ್ಯಾನ ಅಂಗೆ ನೋಡ್ತಾವ ಪುಲಕಿತರಾಗ್ಬೇಕು ಕಣ್ಲಾ... ....”
“ ಬುಡು ಬುಡು ರಾಘಣ್ಣ ನೀನು ಇಸ್ಯಾನ ಎಲ್ಲಿಂದೆಲ್ಲಿಗೋ ಎಳ್ಕತೀಯಾ.....ಈಗ ಏನಪಾ ಮಾಡೋದು...?”
“ ಲೇ, ದೇಸ ಮುಂದೆ ಓಡ್ಬೇಕೂ ಅಂತಾ ಕೇಂದ್ರದಲ್ಲಿ ಆನಂದ ಗೌಡ್ರು ಬುಲೆಟ್ ಟ್ರೇನು ಬುಡ್ತಾವ್ರೆ..ಇಲ್ಲಿ ನೀವು ಆಧುನೀಕರಣದ ಪಾಠ ಕೇಳ್ತಾವ ಪಾರಿವಾಳದ ಕೈಲಿ ಪ್ರೇಮಪತ್ರ ಕಳ್ಸಿ ಅಂತ ಹೇಳಾಕಾಯ್ತದೇನ್ಲಾ? ನೀನು ಆ ಮೂಲೆ ಮನೆ ನಿಂಗಿಗೆ ನನ್ ತಾವಾನೇ ಕಾಗ್ದ ಬರ್ಸಿ ಬರ್ಸಿ ನನ್ಕೈಯಾಗೆ ಕಳ್ಸಿ ಕಳ್ಸಿ ಆಮೇಲೆ ಲಗ್ನಪತ್ರಿಕೆ ದಿನ ಅವಳ್ಗೆ ನಿನ್ ಬಂಡ್ವಾಳ ಗೊತ್ತಾಗಿ ರಂಪಾಟ ಆಗ್ಲಿಲ್ವೇನ್ಲಾ?”
“ ಬುಡ್ತು ಅನ್ನು ರಾಘಣ್ಣ, ಈಗ ದಿವ್ನಾಗ್ ಸಂಸಾರ ನಡ್ಸಿಲ್ವಾ? ಮಗಿನ್ ಪೋನ್ ಕಿತ್ ಮಡಿಕ್ಕಂಡವ್ಳೆ. ಕೊಡಾಕಿಲ್ಲ, ಮಗ ಹಾಳಾಗ್ ಹೋಯ್ತದೆ ಅಂತಾವ್ಳೆ. ಹೆಂಡ್ರು ಅಂತ ಸುಮ್ಗೆ ಬಿಟ್ಟ್ಟೀವ್ನಿ...”
“ ನೀನ್ ಬಲ್ ಸೂರ ಬುಡು. ಅಲ್ಲಾ ಈ ಫೋನ್ ಇಂದ ಎಂತಂತ ಘನಂದಾರಿ ಕೆಲ್ಸ ಆಯ್ತದೆ ಓಯ್ತದೆ..ವಸಿನಾರ ಬುದ್ಧಿ ಬ್ಯಾಡ್ವೇನ್ಲಾ ಇವ್ರಿಗೆ? ಕದ್ದಾಲಿಕೆ ಮಾಡಿ ಸಿಗಬಿದ್ದು ಮಸಿ ಬಳ್ಕಂಡವರವ್ರೆ, ಫೋನ್ ಅಲ್ಲಿ ಮಾತಾಡಿ ಮಾತಾಡಿ ಬರಡು ಹೃದಯವ ಹಸಿಯಾಗಿಸ್ಕೊಂಡೂ ಗದ್ದುಗೆ ಬುಟ್ಟು ಸಂಸಾರದ್ ಸೆರಗಿಡಿದವರವ್ರೆ. ಮೊದ್ಲಿನಂಗೆ ಫೋನ್ ಬೂತ್ಗಳೆಲ್ಲೈತಪ್ಪಾ ಈಗ? ದೂರ ಪಾರ ಓಗೋ ಮಕ್ಳು ಮನೆಗೆ ಇಸ್ಯ ತಿಳಿಸ್ಬೇಕು ಅಂದ್ರೆ ಏನಪ್ಪಾ ಮಾಡೋದು?”
“ ಪರಿಹಾರ ಏಳಪ್ಪಾ ಅಂದ್ರೆ ಬುಲ್ಡೆ ಬುಡ್ತಿಯಲ್ಲ ರಾಘಣ್ಣ.....”
“ ಏನು ನನ್ಮಗ ಇವ್ನು, ಕಾಸ್ ಕೊಟ್ ಮಡಿಕಂಡವ್ನೆ, ಪರಿಹಾರ ಏಳ್ಬುಡ್ಬೇಕು. ಬುದ್ಧಿ ಇದ್ರೆ ಪರಿಯಾರನೂ ಇರ್ತದೆ ಕಣ್ಲಾ...ಅಣೇಲಿ ನೀರಿದ್ರೂ ತೂಬುನ್ ಬಾಯ್ ತೆಗೆದ್ರೆ ಅಲ್ವೇನ್ಲಾ ನೀರು ಅರಿಯೋದು?”
“ ಅಂದ್ರೆ?”
“ ಲೇ, ಅದೆಂತದೊ ಜಾಮರ್ ಅಂತೆ ಕಣ್ಲಾ. ಸಾವ್ರಾರು ಹುಡ್ರುಗೆ ಮೊಬೈಲ್ ತರ್ಬೇಡಿ ಅನ್ನೋ ಬದ್ಲು ಅದ್ನ ಬಿಲ್ಡಿಂಗ್ ಗೆ ಸಿಗಿಸ್ಬುಟ್ರೆ ಅಲ್ಲಿ ಮೊಬೈಲ್ ಸಿಗ್ನಲ್ ಬರಾಕಿಲ್ಲ ಕಣ್ಲಾ. ಊರ್ಗೆಲ್ಲ ಚಪ್ರ ಆಕ್ಸೋ ಬದ್ಲು ತಲೆಗೆ ವಲ್ಲಿ ಸುತ್ಕೊಂಡು ನೆಳ್ಳು ಕಂಡಂಡ್ಕಂಗೆ ಕಣ್ಲಾ ಇದು. ಬಿಲ್ಡಿಂಗ್ ಒಳ್ಗೆ ಸಿಗ್ನಲ್ ಸಿಗಾಕಿಲ್ಲ. ಸ್ಕೂಲು ಕಾಲೇಜು ಇಂದ ಆಚೆ ಬಂದ್ಮೇಲೆ ಎಷ್ಟಾರ ಮಾತಾಡ್ಲಿ ಬುಡ್ಲಾ.....”
“ ಮತ್ತ ಅದ ಯಾಕೆ ಮಾಡಾ ಒಲ್ರು?”
“ಅಂಗೆ ಮಾಡ್ಬುಟ್ರೆ ಮೇಸ್ಟ್ರುಗಳ ಮೊಬೈಲೂ ಸತ್ತೋಯ್ತದೆ! ಅವ್ರ್ ಎಂಡ್ರು ಮಕ್ಳು ಕುಟ್ಟೆ ಮಾತಾಡ್ಬೇಕಲ್ಲಾ.....ಅದ್ಕೆ ಬಿಲ್ಡಿಂಗೆ ಜಾಮರ ಹಾಕೋ ಬದಲು ಸಾವ್ರಾರು ವಿದ್ಯಾರ್ಥಿಗಳು ಮೊಬೈಲ್ ತರಂಗಿಲ್ಲ ಅಂತ ಕಾನೂನು ಮಾಡ್ತಾವ್ರೆ.”
“ ಸರಿಯಿಲ್ಲ ಬುಡಣ್ಣ ಇದು. ಈಗ ಮಗೀಗ್ ಎಂಗಪ್ಪಾ ಸಮಾಧಾನ ಮಾಡೋದು?”
“ ಏ, ಇದೇನು ಆಗಲ್ಲ, ಓಗಲ್ಲ ನಡಿಲಾ ಸಿಂಗ್ರಿ”
“ ಇದೇನಣ್ಣ ಇಂಗಂದ್ಬುಟ್ಟೆ!”
“ ಮತ್ತೆ ಈ ಪಾಟಿ ಮೊಬೈಲು ಕಂಪೆನಿಗಳು ಐಲು ಜನನಾಯಕ್ರು ಇರೋವಾಗ ಆಯ್ತದೇನ್ಲಾ ಇದು?...ಸುಮ್ನೆ ಹೊಟ್ಟೆ ಕೆಟ್ಟಾಗ ಒಂದು ಹೂಸು ಬಿಟ್ಟಂಗೆ ಇಂಗೆ ಒಂದು ಮಾತು ಎಸೀತಾರೆ. ಮೂರು ನಿಮ್ಸ ಮೂಗು ಮುಚ್ಕೊ....ಮೂರ್ ದಿನ ಆದ್ಮೇಲೆ ಕಾನೂನ ಕಿತ್ತಾಕ್ತಾರೆ....ನಡಿ ಮಗೀಗೂ ಆ ನಿಂಗವ್ವಗೂ ಸಮಾಧಾನಾ ಏಳ್ತೀನಿ.”
“ ಬಾರಣ್ಣೋ ಪುಣ್ಯ ಬತ್ತದೆ. ಇವತ್ತು ಸನಿವಾರ ಅಲ್ಲ್ವಾ ಕಾಳುಪ್ಪಿಟ್ ಮಾಡವ್ಳೆ, ಜೊತೆಗೆ ಬಿಸಿ ಕಾಫೀನೂ ಉಯ್ಕಳಾವ..ಬಾ...”
No comments:
Post a Comment